ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಸುಳ್ಯ ನಗರದ ನೇತೃತ್ವದಲ್ಲಿ ಆ.14 ರಂದು ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯ ಆಮಂತ್ರಣ ಪತ್ರಿಕೆಯು ಬಿಡುಗಡೆ ಕಾರ್ಯಕ್ರಮ ಇಂದು ಕಲ್ಕುಡ ದೇವಸ್ಥಾನ ಗಾಂಧಿನಗರದಲ್ಲಿ ನಡೆಯಿತು.ಈ ಸಂದರ್ಭ ವಿ ಎಚ್ ಪಿ ಸುಳ್ಯ ಪ್ರಖಂಡ ಅಧ್ಯಕ್ಷರು ಸೋಮಶೇಖರ ಪೈಕ, ಕಾರ್ಯದರ್ಶಿ ನವೀನ್ ಸುಳ್ಳಿ,ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ರೂಪೇಶ್ ಪೂಜಾರಿಮನೆ,ವಿ ಎಚ್ ಪಿ ಸುಳ್ಯ ನಗರ ಅಧ್ಯಕ್ಷರು ಉಪೇಂದ್ರ ನಾಯಕ್ ನಗರ ಕಾರ್ಯದರ್ಶಿ ದೇವಿ ಪ್ರಸಾದ್ ಅತ್ಯಾಡಿ, ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಯಾದವ್, ಸುಳ್ಯ ನಗರ ಭಜರಂಗದಳ ಸಂಯೋಜಕ್ ವರ್ಷಿತ್ ಚೊಕ್ಕಾಡಿ,ನಗರದ ಪ್ರಮುಖರು ಹಾಗೂ ನಗರದ
ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
- Sunday
- September 22nd, 2024