ಬೆಂಗಳೂರು ಮತ್ತಿಕೆರೆ ಲಲಿತಾ ಕಲಾ ಆಡಿಟೋರಿಯಂ ನಲ್ಲಿ ಜು.28ರಂದು ನಡೆದ ನಟ ಪುನಿತ್ ರಾಜ್ ಕುಮಾರ್ ನೆನಪಿನ ಕಾರ್ಯಕ್ರಮದಲ್ಲಿ ಗಾಯಕ ವಿಜಯಕುಮಾರ್ ಹಳೆಗೇಟುರವರಿಗೆ ಪ್ರಕೃತಿ ರತ್ನ ಗಾನ ಕೋಗಿಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚಿಗೆ ಪಾಂಬಾರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಗಾನ ಚತುರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಜಯ ಕುಮಾರ್ ರವರು ಸುಳ್ಯ ಟಿಎಪಿಸಿಎಂಎಸ್ ಉದ್ಯೋಗಿಯಾಗಿದ್ದಾರೆ.
- Saturday
- September 21st, 2024