Ad Widget

ಮಡಪ್ಪಾಡಿ:  ವಿಷ ಸೇವಿಸಿ ಆತ್ಮಹತ್ಯೆ!

ಮಡಪ್ಪಾಡಿಯ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು (ಜು.3 ) ವರದಿಯಾಗಿದೆ.ಮೃತರನ್ನು ಸೀತಾರಾಮ 55 ವರ್ಷ ಎಂದು ಗುರುತಿಸಲಾಗಿದೆ. ಆರ್ಥಿಕ ಸಂಕಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಅಡಿಕೆ ತೋಟಕ್ಕೆ ಹಳದಿ ರೋಗ ಬಾಧಿಸಿದ್ದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು.

ಲಕ್ಷಾಂತರ ರೂಪಾಯಿಗಳಲ್ಲಿ ನಿರ್ಮಿಸಿದ ಕುರುಂಜಿ ಗುಡ್ಡೆ ಪಾರ್ಕ್ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಾಡು – ನಿರ್ವಹಣೆ ಜವಬ್ದಾರಿ ಯಾರಿಗೆ ಉತ್ತರಿಸುವಿರಾ ?

ಸುಳ್ಯ: ಸುಳ್ಯ ನಗರದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಿದ್ದ ಕುರುಂಜಿಗುಡ್ಡೆ ಪಾರ್ಕ್ ಇದೀಗ ನಿರ್ವಾಹಣೆ ಮಾಡದೇ ಇದ್ದು ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಇಡೀ ಸುಳ್ಯದ ನಾಗರೀಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಪ್ರಕೃತಿಯ ರಮಣೀಯತೆ, ತೋಟಗಳ ಸೌಂದರ್ಯ ರಾಶಿ ಜತೆಗೆ ನಗರದ ವಿಹಂಗಮ ನೋಟ ಹೊಂದಿರುವ ಸುಳ್ಯ ನಗರದ ಅತೀ ಎತ್ತರದ ಪ್ರದೇಶದಲ್ಲಿ ಕುರುಂಜಿಗುಡ್ಡೆ ಎಂಬಲ್ಲಿ ನಗರ ಪಂಚಾಯತ್ ಕೆಲ...
Ad Widget

ಕುರುಂಜಿಗುಡ್ಡೆ ಪಾರ್ಕ್ ನಲ್ಲಿ  ಸೂಚನಾ ಫಲಕ ಅಳವಡಿಕೆಗೆ ನ.ಪಂ. ಆಡಳಿತಾಧಿಕಾರಿಗಳಿಗೆ ಕೇರ್ಪಳ ಪಯಸ್ವಿನಿ ಯುವಕ ಮಂಡಲ ಮನವಿ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುರುಂಜಿಗುಡ್ಡೆ ಪಾರ್ಕ್ ಗೆ ಸಮಯ ನಿಗದಿ ಪಡಿಸಿ ನಾಮಫಲಕ ಅಳವಡಿಸುವಂತೆ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ವತಿಯಿಂದ ನ.ಪಂ. ಆಡಳಿತಾಧಿಕಾರಿ ಗಳಿಗೆ ಮನವಿ ಜು.1 ರಂದು ಸಲ್ಲಿಸಲಾಯಿತು.ನ.ಪಂ. ವತಿಯಿಂದ ಕೆಲವು ವರ್ಷಗಳ ಹಿಂದೆ  ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಅಲ್ಲಿ  ಆಕರ್ಷಕ ಗಿಡಗಳನ್ನು ನೆಡಲಾಗಿದೆ. ಕುಳಿತುಕೊಳ್ಳಲು ಸಿಮೆಂಟ್ ಬೆಂಚುಗಳನ್ನು ಅಳವಡಿಸಲಾಗಿದೆ. ಮಕ್ಕಳಿಗೆ...

ಕವನ : ಎಚ್ಚರವಹಿಸಬೇಕು ಮಳೆಗಾಲದಲ್ಲಿ…

ಇಳೆಯು ಮಳೆಯನ್ನು ಮನತುಂಬಿ ಕರೆದಿದೆ, ಇಳೆಯ ಕರೆಗೆ ಮಳೆಯು ಧರೆ ತುಂಬಾ ಸುರಿದಿದೆ...ರಾತ್ರಿ-ಹಗಲೆನ್ನದೇ ಸುರಿಯುತ್ತಿರುವ ಈ ಮಳೆಗೆ ತುಂಬಿ ಹರಿಯುತ್ತಿವೆ ನದಿ-ಹಳ್ಳಗಳೆಲ್ಲಾ, ನದಿಯ ಬಳಿ ತೆರಳುವಾಗ ಎಚ್ಚರವಹಿಸಬೇಕು ನಾವೆಲ್ಲಾ...ರಸ್ತೆಯಲ್ಲಿ ಸಾಗುವಾಗಲೂ, ಮನೆಯ ಹೊರಗಡೆ ನಡೆಯುವಾಗಲೂ ಜಾಗ್ರತೆ ವಹಿಸಲೇಬೇಕಿದೆ ಈ ಮಳೆಗಾಲದಲ್ಲಿ, ಕೆಸರು ತುಂಬಿದ ರಸ್ತೆಯಲ್ಲಿ, ಪಾಚಿ ತುಂಬಿದ ಮನೆಯಂಗಳದಲ್ಲಿ...ಮಳೆಗಾಲದಲ್ಲಿ ಆದಷ್ಟು ಹೋಗದಿರಿ ಪ್ರವಾಸವನ್ನ, ತುಂಬಿ ಹರಿಯುತ್ತಿರುವ...

ಗುತ್ತಿಗಾರು : ಶೌರ್ಯ ವಿಪತ್ತು ಘಟಕದಿಂದ ಶ್ರಮದಾನ

ಪೈಕ ಶ್ರೀ ಶಿರಾಡಿ ದೈವಸ್ಥಾನದ ಎದುರುಗಡೆ ಬೃಹತ್ ಕಿನ್ನಿಗೋಳಿ ಮರ ಬಿದ್ದು ಸಾರ್ವಜನಿಕ ದಾರಿಗೆ ತೊಂದರೆಯಾಗಿತ್ತು. ದಾರಿಗೆ ಬಿದ್ದ ಮರದ ಗೆಲ್ಲು ಬಿದ್ದ ಗೆಲ್ಲುಗಳನ್ನು ಗುತ್ತಿಗಾರು ಶೌರ್ಯ ವಿಪತ್ತು ಘಟಕದ ಸದಸ್ಯರು ತೆರವುಗೊಳಿಸಿದರು. ಈ ಶ್ರಮದಾನದಲ್ಲಿ ಶೌರ್ಯ ವಿಪತ್ತು ಘಟಕದ ಸಂಯೋಜಕರಾದ ಲೋಕೇಶ್ವರ ಡಿ ಆರ್, ಸದಸ್ಯರುಗಳಾದ ಪಿ ಜಯರಾಮ, ಅಚ್ಯುತ ಗುತ್ತಿಗಾರು, ಸತೀಶ್ ಮೂಕಮಲೆ,...

ಬಾಳಿಲ : ವಿದ್ಯಾರ್ಥಿ ಸರಕಾರದ ಪದಗ್ರಹಣ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ 2024 --25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ಜು.02ರಂದು ನಡೆಯಿತು. ವಿದ್ಯಾರ್ಥಿ ಸರಕಾರದ ರಾಜ್ಯಪಾಲರು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಯಶೋಧರ ಎನ್ ಸಮಾರಂಭದಲ್ಲಿ ಭಾಗವಹಿಸಿ ಸಭಾಪತಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಂಪುಟ ದರ್ಜೆಯ ಸಚಿವರು ಮತ್ತು ಸಹಾಯಕ ಸಚಿವರುಗಳಿಗೆ ಶಾಲಾ ಸಂವಿಧಾನದಂತೆ ಪಂಚ ಭಾಷೆಗಳಾದ ಸಂಸ್ಕೃತ, ಕನ್ನಡ, ಇಂಗ್ಲಿಷ್,...

ಸುಬ್ರಹ್ಮಣ್ಯ : ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ  ಪದಗ್ರಹಣ ಸಮಾರಂಭ ಹಾಗೂ ಚಾರ್ಟರ್ ನೈಟ್ ಸಮಾರಂಭವು  ಜು.01 ರಂದು ಏನೆಕಲ್ ನ ಸಂತೃಪ್ತಿ ಕೃಷಿ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಡಿಸ್ಟ್ರಿಕ್ಟ್ 317 ಡಿ ದ್ವಿತೀಯ ಉಪ ರಾಜ್ಯಪಾಲ ಹೆಚ್. ಎಂ. ತಾರಾನಾಥ್ ಪದಗ್ರಹಣ  ನೆರವೇರಿಸಿಕೊಟ್ಟರು. ಚಾರ್ಟರ್ ನೈಟ್ ಕಾರ್ಯಕ್ರಮವನ್ನು ಪೂರ್ವ ರಾಜ್ಯಪಾಲ...

ಸುಳ್ಯ : ಭೂನ್ಯಾಯ ಮಂಡಳಿಗೆ ಸದಸ್ಯರ ನೇಮಕಗೊಳಿಸಿದ ಸರಕಾರ

ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರನ್ನು ಸರಕಾರ ನೇಮಕ ಮಾಡಿದೆ. ಮಾಜಿ ತಾ.ಪಂ.ಸದಸ್ಯೆ ಶ್ರೀಮತಿ ಅನಸೂಯ ಪೆರುವಾಜೆ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜಾರಾಮ ಬೆಟ್ಟ ಹಾಗೂ ಐವರ್ನಾಡಿನ ಕಾಂಗ್ರೆಸ್ ಮುಂದಾಳು ಕರುಣಾಕರ ಮಡ್ತಿಲ, ನ್ಯಾಯವಾದಿ ಫವಾಜ್ ಕನಕಮಜಲು ಇವರುಗಳನ್ನು ಸದಸ್ಯರನ್ನು ರಾಜ್ಯ ಸರಕಾರ ಸದಸ್ಯರನ್ನಾಗಿ ನೇಮಕಗೊಳಿಸಿದ್ದು, ಪುತ್ತೂರು ಸಹಾಯಕ ಕಮಿಷನ‌ರ್ ಅಧ್ಯಕ್ಷರಾಗಿರುತ್ತಾರೆ. ತಹಶೀಲ್ದಾ‌ರ್ ಕಾರ್ಯದರ್ಶಿಯಾಗಿರುತ್ತಾರೆ.

ವೈದ್ಯ ಪಿ.ರಾಮಕೃಷ್ಣ ಭಟ್ ಅವರಿಗೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸನ್ಮಾನ

ವೈದ್ಯರ ದಿನಾಚರಣೆ ಅಂಗವಾಗಿ ಬಳ್ಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯ ಪಿ.ರಾಮಕೃಷ್ಣ ಭಟ್ ಅವರನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು. ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್, ಪ್ರಮುಖರಾದ ಚಿದಾನಂದ ಕುಳ, ಭರತ್ ನೆಕ್ರಾಜೆ, ರವಿ ಕಕ್ಕೆಪದವು, ಗಿರಿಧರ ಸ್ಕಂದ, ಸೀತಾರಾಮ - ಎಣ್ಣೆಮಜಲು, ಮಾಯಿಲಪ್ಪ ಸಂಕೇಶ, ಶಿವರಾಮ್ ಏನೆಕಲ್ಲು, ಮೋಹನ್ ದಾಸ್‌ ಎಣ್ಣೆಮಜಲು, ಗೋಪಾಲ್ ಎಣ್ಣೆಮಜಲು,...

ಮೇನಾಲದಲ್ಲಿ ವಿಷ್ಣು ಯುವಕ ಮಂಡಲದಿಂದ ವನಮಹೋತ್ಸವ

ಅಜ್ಜಾವರ ಮೇನಾಲ ವಿಷ್ಣು ಯುವಕ ಮಂಡಲ ಇದರ ವತಿಯಿಂದ ಜು.1ರಂದು ವನಮಹೋತ್ಸವ ಕಾರ್ಯಕ್ರಮ ಮೇದಿನಡ್ಕದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ  ಪ್ರಸಾದ್ ರೈ ಮೇನಾಲ, ವಿಷ್ಣು ಯುವಕ ಮಂಡಲ ಅಧ್ಯಕ್ಷರಾದ ರಂಜಿತ್ ರೈ ಮೇನಾಲ, ಗೌರವ ಅಧ್ಯಕ್ಷರಾದ ಶ್ರೀಧರ ಮಣಿಯಾಣಿ, ವಿಷ್ಣು ಯುವಕ ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಾಲ್,ಕೋಶಾಧಿಕಾರಿಯಾದ ಕೀರ್ತನ್...
Loading posts...

All posts loaded

No more posts

error: Content is protected !!