Ad Widget

ತುಂಬಿ ಹರಿಯುತ್ತಿರುವ ಗೌರಿ ಹೊಳೆ – ಪೆರುವಾಜೆ ಸವಣೂರು ರಸ್ತೆ ಬಂದ್

https://youtu.be/8RMyHWzoAls?si=gEjgh_NKAMFH7VU7 ಗೌರಿ ಹೊಳೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪೆರುವಾಜೆ ಸವಣೂರು ರಸ್ತೆಗೆ ನೀರು ಬಂದಿದೆ. ಇಂದು ಸುರಿದ ಮಳೆಗೆ ಗೌರಿ ಹೊಳೆ ಉಕ್ಕಿ ಹರಿಯುತ್ತಿದ್ದು ಪೆರುವಾಜೆಯ ಕಾಪು ಸಮೀಪ ಹೊಳೆಯ ನೀರು ರಸ್ತೆ ಆವರಿಸಿದ್ದು ಸಂಪರ್ಕ ಕಡಿತಗೊಂಡಿದೆ.

ಗುತ್ತಿಗಾರು : ಪಂಚಾಯತ್ ರಸ್ತೆಯಲ್ಲಿ ಬರೆ,ಕಂಪೌಂಡ್ ಕುಸಿತ

ಗುತ್ತಿಗಾರು ಪಂಚಾಯತ್ ರಸ್ತೆಯಲ್ಲಿದ್ದ ಮರವೊಂದು ಶಾಲೆಗೆ ಬೀಳುವ ಪರಿಸ್ಥಿತಿಯಲ್ಲಿದ್ದುದರಿಂದ ಅದನ್ನು ತೆರವುಗೊಳಿಸಲಾಗಿತ್ತು. ಇದೀಗ ಭಾರಿ ಮಳೆಯಿಂದಾಗಿ ಇದೇ ರಸ್ತೆಯಲ್ಲಿ ಬರೆ, ಹಾಸ್ಟೆಲ್ ಕಂಪೌಂಡ್ ಕುಸಿತಗೊಂಡಿದೆ.
Ad Widget

ಆಟೋದಲ್ಲಿ ಮರೆತು ಹೋದ ಮೊಬೈಲ್, ಪ್ರಾಮಾಣಿಕವಾಗಿ ಹಿಂದುರುಗಿಸಿದ ಆಟೋ ಚಾಲಕ ನಾರಾಯಣ್

ಸುಳ್ಯ: ಸುಳ್ಯ ನಗರದಲ್ಲಿ ಬಾಡಿಗೆ ರಿಕ್ಷಾ ಓಡಿಸುತ್ತಿರುವ ಆಟೋ ಚಾಲಕ ತನ್ನ ಆಟೋ ರಿಕ್ಷಾ ದಲ್ಲಿ ಅಜ್ಜಾವರ ಗ್ರಾಮದ ಮಹಿಳೆಯೊಬ್ಬರು ಮೊಬೈಲ್ ಅನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದು ಇದನ್ನು ಗಮನಿಸಿದ  ವೀರ ಕೇಸರಿ ಆಟೋ ರಿಕ್ಷಾ ಪಾರ್ಕಿಂಗ್ ಚಾಲಕರಾದ ನಾರಾಯಣ ಎಸ್  ಎಂ ಪ್ರಾಮಾಣಿಕವಾಗಿ ಹಿಂದುರುಗಿಸಿದ್ದು ಇವರು  ಬಿಎಂಎಸ್ ಸದಸ್ಯರು ಹಾಗು ಭಾಜಪದ ಸುಳ್ಯ ನಗರ...

ಸಂಪರ್ಕ ಕಡಿತದ ಭೀತಿಯಲ್ಲಿ ಕಮಿಲ ಮೊಗ್ರ ರಸ್ತೆ

ಗುತ್ತಿಗಾರು ಗ್ರಾಮದ ಕಮಿಲ ಮೊಗ್ರ  ರಸ್ತೆಯ  ಕಾಂತಿಲ ಚೈಪೆ  ಎಂಬಲ್ಲಿ ಹೊಳೆಬದಿ ರಸ್ತೆ ಕುಸಿದಿದೆ. ಸುಮಾರು 40 ಅಡಿಗಳಷ್ಟು ಕೆಳಗಿನ ತನಕ ಕುಸಿದಿದ್ದು ಅಪಾಯ ಆಹ್ವಾನಿಸುತ್ತಿದೆ.  ಇಲ್ಲಿ  ನಿರಂತರ ಅನೇಕ  ವಾಹನಗಳು ಹಾದು ಹೋಗುತ್ತಿದ್ದು ಅನಾಹುತ ಸಂಭವಿಸುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.

ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕದ್ರವ್ಯ ಚಟುವಟಿಕೆಗಳ ಕುರಿತು ಲೋಕಸಭೆಯ ಗಮನಸೆಳೆದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದೆಹಲಿ: ಸಂಸತ್ತು ನಿಯಮ 377ರ ಪ್ರಕಾರ ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಸಂಸದರಿಗೆ ತಮ್ಮ ವಿಷಯಗಳನ್ನು ಸದನದ ಮುಂದಿಡುವ ಅವಕಾಶವಿದ್ದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರೆ ಮೀರಿರುವ ಮಾದಕದ್ರವ್ಯ ವ್ಯಸನೆ ಮತ್ತು ಮಾರಾಟದ ಚಟುವಟಿಗೆಗಳ' ಕುರಿತು ಸದನದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ."ಪ್ರತಿ ತಿಂಗಳ ಮಾಧ್ಯಮಗಳ...

ಅಜ್ಜಾವರ : ಮನೆಯ ಮೇಲೆ ಮುರಿದು ಬಿದ್ದ ಮರ – ತಪ್ಪಿದ ಅನಾಹುತ

ಅಜ್ಜಾವರ ಗ್ರಾಮದ ಅಡ್ಪoಗಾಯ ಮಾವಿನಪಳ್ಳ ಎಂಬಲ್ಲಿ ಮಹಿಳೆಯೋರ್ವರ ಮನೆಗೆ ಮರ ಬಿದ್ದು ಹಾನಿಯಾದ ಘಟನೆ ಇಂದು ವರದಿಯಾಗಿದೆ.   ಮೊನ್ನಿ ಎಂಬುವವರ  ಮನೆ ಮೇಲೆ ಮರ  ಬಿದ್ದು ಮನೆಯ ಹಂಚುಗಳು ಮತ್ತು ಅಲ್ಪ ಪ್ರಮಾಣದಲ್ಲಿ ಗೋಡೆಗಳಿಗೂ ಕೂಡ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

ಸುಳ್ಯ : ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರಿಗೆ ಬೀಳ್ಕೊಡುಗೆ –  ಸನ್ಮಾನ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ ಈ ರವರ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭವು ಸುಳ್ಯದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  ಜು 30 ರಂದು ನಡೆಯಿತು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಬೆಳಗಿ ಉದ್ಘಾಟಿಸಿ, ನಿವೃತ್ತರಾದ ಬಿಇಓ ರಮೇಶ್ ಅವರಿಗೆ ಶುಭಹಾರೈಸಿದರು. ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಮಂಜುನಾಥ್ ಜಿ ವಹಿಸಿದ್ದರು.  ನಿವೃತ್ತ...

ಕಾಟಿಪಳ್ಳ ತೋಟಗಳಿಗೆ ನುಗ್ಗಿದ ಪಯಸ್ವಿನಿ – ಮನೆಗೆ ನೀರು ನುಗ್ಗುವ ಆತಂಕ !

ಅಜ್ಜಾವರ: ಅಜ್ಜಾವರ ಗ್ರಾಮದ ಕಾಟಿಪಳ್ಳದಲ್ಲಿ ಸುಳ್ಯ ಜೀವನದಿ ಪಯಸ್ವಿನಿ ಒಡಲು ತುಂಬಿ ಹರಿಯುತ್ತಿದ್ದು ಇದೀಗ ಪಕ್ಕದಲ್ಲಿನ ತೋಟಗಳಿಗೆ ನೀರು ನುಗ್ಗಿದ ಘಟನೆ ವರದಿಯಾಗಿದೆ. ಕಾಟಿಪಳ್ಳ ನಿವಾಸಿಗಳಾದ ವಿಶ್ವನಾಥ ರಾವ್ , ರಾಮ್ ಪ್ರಸಾದ್ , ಹಾಗೂ ದಿನೇಶ್ ಎಂಬುವವರ ತೋಟಗಳಿಗೆ ನೀರು ನುಗ್ಗಿದ್ದು ಇದೇ ರೀತಿಯಲ್ಲಿ ಮಳೆ ಮುಂದುವರೆದರೆ ನಾಲ್ಕು ವರ್ಷಗಳ ಹಿಂದಿನಂತೆ ಈ ಭಾರಿಯು...

ಕವನ : ಒಳ್ಳೆಯತನವೇ ಗೆಲ್ಲುವುದಿಲ್ಲಿ, ಒಳ್ಳೆಯ ಮನಕೆ ಒಳಿತಾಗುವುದಿಲ್ಲಿ…

ಒಳ್ಳೆಯ ಗುಣಕೆ, ಒಳ್ಳೆಯ ತನಕೆ ಬೆಲೆಯೇ ಇಲ್ಲ ಅನಿಸುವುದಿಲ್ಲಿ, ಕೆಲವೊಮ್ಮೆ ಅನಿಸುವುದಿಲ್ಲಿ...ಆದರೆ ಒಳ್ಳೆಯತನವೇ, ಒಳ್ಳೆಯ ಗುಣವೇ ಕೈ ಹಿಡಿಯುವುದಿಲ್ಲಿ, ಪ್ರತಿಕ್ಷಣವೂ ಕೈ ಹಿಡಿಯುವುದಿಲ್ಲಿ...ನಾವು ಮಾಡಿದ ಪಾಪ-ಪುಣ್ಯಗಳೇ ನಮ್ಮ ಬದುಕಿನ ಲೆಕ್ಕಾಚಾರಗಳು, ಹುಟ್ಟು-ಸಾವಿನ ಮಧ್ಯದಲ್ಲೇ ನಮಗೆ ಸಿಗುವವು ನಮ್ಮ ಕರ್ಮದ ಪ್ರತಿಫಲಗಳು...ಮೇಲ್ನೋಟಕ್ಕೆ ಎಲ್ಲರೂ ಒಳ್ಳೆಯವರಂತೆ ಕಾಣಿಸುವರಿಲ್ಲಿ, ಮನದೊಳಗಿನ ಹುಳುಕನ್ನು ಬಲ್ಲವರಾರು ಅಲ್ಲವೇ ಇಲ್ಲಿ...!?ಹಾಗೆಂದು ಎಲ್ಲರೂ ಇಲ್ಲಿ ಕೆಟ್ಟವರಲ್ಲ,...
error: Content is protected !!