Ad Widget

ಕೊಲ್ಲಮೊಗ್ರು : ಕಾರ್ಗಿಲ್ ವಿಜಯ ದಿವಸ್ ಮತ್ತು ಸನ್ಮಾನ ಕಾರ್ಯಕ್ರಮ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಜು.26 ಶುಕ್ರವಾರದಂದು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇಲ್ಲಿ ಕಾರ್ಗಿಲ್ ವಿಜಯ ದಿವಸ್ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ನಿವೃತ್ತ ಯೋಧರಾದ ಪದ್ಮನಾಭ ಗೋಳ್ಯಾಡಿ ಅವರು ದೀಪ ಪ್ರಜ್ವಲನೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಎಂ.ಜೆ.ಎಫ್ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ ನಿವೃತ್ತ ಯೋಧರಾದ ಪದ್ಮನಾಭ ಗೋಳ್ಯಾಡಿ, ಸತೀಶ್.ಜೆ ಜಾಲುಮನೆ, ಸೋಮಶೇಖರ ಮಾವಾಜಿ ಇವರನ್ನು ಸನ್ಮಾನಿಸಲಾಯಿತು.
ಸೋಮಶೇಖರ ಮಾವಾಜಿ ಅವರು ಕಾರ್ಗಿಲ್ ಬಗ್ಗೆ ಮಾತುಗಳನ್ನಾಡಿದರು.
ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇಲ್ಲಿನ ಮುಖ್ಯೋಪಾಧ್ಯಾಯರಾದ ಸುರೇಶ್.ಪಿ.ಕೆ ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ರಾಜೇಶ್.ಎನ್.ಎಸ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಲಯನ್ಸ್ ಕ್ಲಬ್ ಖಜಾಂಜಿ ಲ| ಮೋಹನ್ ದಾಸ್ ರೈ, ಲ| ರಾಮಚಂದ್ರ ಪಳಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಷ್ಣು ಪಾತಿಕಲ್ಲು ಹಾಗೂ ದೀಪಕ್ ನಂಬಿಯಾರ್ ನಿವೃತ್ತ ಯೋಧರ ಪರಿಚಯ ಮಾಡಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ| ಕೃಷ್ಣಕುಮಾರ್ ಬಾಳುಗೋಡು ಸ್ವಾಗತಿಸಿ ಲ| ಮೋಹನ್ ದಾಸ್ ರೈ ಧನ್ಯವಾದ ಸಮರ್ಪಿಸಿದರು. ದೀಪಕ್ ನಂಬಿಯಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!