Ad Widget

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿಮನೆ ಮದ್ದು ಶಿಬಿರ

ಆಯುರ್ವೇದ ಚಿಕಿತ್ಸೆಗೆ ಪ್ರಖ್ಯಾತಿ ಹೊಂದಿದ ಪಂಚಕರ್ಮ ಚಿಕಿತ್ಸೆ ನೀಡುವ ,ಕೆ .ಪಿ .ಎಂ .ಇ . ನೋಂದಾಯಿತ , ಐ.ಎಸ್ .ಓ. ಸರ್ಟಿಫಿಕೇಟ್ ಹೊಂದಿದ , ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು , ಪುತ್ತೂರು ಇದರ ಆಶ್ರಯದಲ್ಲಿ ಹಾಗೂ ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ ಇದರ ಸಹಯೋಗದಲ್ಲಿ ಮನೆ ಮದ್ದು ಶಿಬಿರವು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಜುಲೈ 21 ಮತ್ತು 22ರಂದು ನಡೆಯಿತು .
ಕು . ಸುಧೀಕ್ಷಾ ಮತ್ತು ಕು.ಸುನಿಧಿ ಇವರು ಪ್ರಾರ್ಥಿಸಿದರು .ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ ಇದರ ಉಪಾಧ್ಯಕ್ಷ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರು ಪ್ರಾಸ್ತಾವಿಕವಾಗಿ ಮಾತಾಡಿ, ಅತಿಥಿಗಳನ್ನು ಪರಿಚಯಿಸಿದರು. ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಮುಖ್ಯ ಜೀವವಿಮಾ ಸುಲಹೆಗಾರ ಎಂ .ಎಸ್ . ಭಟ್ ಅತಿಥಿಗಳನ್ನು ಹೂ ನೀಡುವುದರ ಮೂಲಕ ಗೌರವಿಸಿದರು .ಮುಖ್ಯ ಅತಿಥಿಗಳಾದ ಅರೋಗ್ಯ ಭಾರತಿಯ ರಾಷ್ಟ್ರೀಯ ಸಚಿವ ಹಾಗೂ ರಾಷ್ಟೀಯ ಯೋಗ ಪ್ರಮುಖ್ ಡಾ ಟಿ . ಎನ್ .ಮಂಜುನಾಥ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ ಇದರ ಅಧ್ಯಕ್ಷ ಹಾಗೂ ಖ್ಯಾತ ನರಮಾನಸಿಕ ತಜ್ಞ ಡಾ .ಗಣೇಶ್ ಪ್ರಸಾದ್ ಮುದ್ರಜೆ ಇವರು ಅಧ್ಯಕ್ಷತೆ ವಹಿಸಿದ್ದರು . ” ಡಾ . ಬಂಗಾರಡ್ಕ ಇವರ ಪ್ರಸಾದಿನೀ ಆಯುರ್ನಿಕೇತನ ಮಾಡುವ ಸಮಾಜಮುಖೀ ಕಾರ್ಯ ಎಲ್ಲರಿಗೂ ಒಂದು ಮಾದರಿ ” ಎಂದು ಅಭಿನಂದಿಸಿದರು . ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ ಇದರ ಕಾರ್ಯದರ್ಶಿ ಗಣೇಶ್ ಭಟ್ ಮುವ್ವಾರು ಇವರು ಧನ್ಯವಾದಗೈದರು . ನಂತರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಸಂಪನ್ಮೂಲ ವ್ಯಕ್ತಿಯಾದ , ಜಪಾನ್ ಮಾರಿಷಸ್ ,ಯು .ಕೆ .,ಫಿಲಿಪೈನ್ಸ್ , ರಷ್ಯಾ ದೇಶಗಳಲ್ಲಿ ಆಯುರ್ವೇದ ಮತ್ತು ಯೋಗದ ಕುರಿತು ಭಾರತದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಡಾ ಟಿ . ಎನ್ .ಮಂಜುನಾಥ್ ಆರೋಗ್ಯಕ್ಕಾಗಿ ಅನುಸರಿಸಬೇಕಾದ ದಿನಚರಿಯ ಬಗ್ಗೆ ಮಾತನಾಡಿದರು . ಪ್ರಾರ್ಥನೆ ,ಆಹಾರ , ವ್ಯಾಯಾಮ , ಅಭ್ಯಂಗಗಳ ನಿಯಮಗಳನ್ನು ವಿವರಿಸಿದರು . ” ಮೊದಲಿನ ಕಾಲದಲ್ಲಿ ಗಡಿಯಾರ ಇರಲಿಲ್ಲ , ಆದರೆ ಅವರಿಗೆ ಸಮಯ ಇತ್ತು . ಈಗ ಗಡಿಯಾರ ಇದೆ , ಆದರೆ ಯಾರ ಬಳಿಯೂ ಸಮಯವಿಲ್ಲ . ” ಎಂದು ಮಾರ್ಮಿಕವಾಗಿ ನುಡಿದರು . ಶಿಬಿರದಲ್ಲಿ ತಯಾರಿಸುವ ಮನೆಮದ್ದುಗಳ ಬಗ್ಗೆ ಸೂಚನೆಗಳನ್ನು ನೀಡಿ , ಡಾ ಟಿ . ಎನ್ .ಮಂಜುನಾಥ್ ನಿರ್ದೇಶನದಲ್ಲಿ , ಶಿಬಿರಾರ್ಥಿಗಳಿಂದಲೇ ಔಷಧ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು . ತಯಾರಿಸಿದ ಮನೆ ಮದ್ದುಗಳ ಮಾದರಿಗಳನ್ನು ಎಲ್ಲರಿಗೂ ವಿತರಿಸಲಾಯಿತು . ಕಣ್ಣಿನ ತೊಂದರೆಗಳಿಗೆ ಮಾಡುವಂತಹ ನೇತ್ರಸೇಕ , ಪಿಂಡೀ ಚಿಕಿತ್ಸಾ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ಆಯುರ್ವೇದ ತಜ್ಞ ವೈದ್ಯ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ನೀಡಿದರು . ” ಕೊಲೆಸ್ಟರಾಲ್ ಸಂಪೂರ್ಣ ಹಾಳು ಎಂಬ ತಪ್ಪು ಅಭಿಪ್ರಾಯ ಇವತ್ತು ಪ್ರಚಾರ ಪಡೆಯುತ್ತಿದೆ . ಅದಕ್ಕೆ ಅನವಶ್ಯಕ ಆಧುನಿಕ ಔಷಧಗಳ ಚಟಕ್ಕೆ ಬಲಿಯಾಗುವ ಬದಲು ಹಸಿಬೆಳ್ಳುಳ್ಳಿ , ಅರಸಿನ , ತುಳಸಿ , ಶುಂಠಿ ಇತ್ಯಾದಿಗಳನ್ನು ನಿಯಮಿತವಾಗಿ ಸೇವಿಸಿ ಹೃದಯದ ಅರೋಗ್ಯ ಕಾಪಾಡಿಕೊಳ್ಳಬಹುದು. ಹೃದಯದ ಕ್ರಿಯಾತ್ಮಕ ವಿಕೃತಿಗಳಿಗೆ , ತುರ್ತು ಸಂದರ್ಭ ಹೊರತು ಪಡಿಸಿ ಪರಿಣಾಮಕಾರಿ ಚಿಕಿತ್ಸೆಗಳಿವೆ “ಎಂದರು .ಎರಡನೇ ದಿನದ ಶಿಬಿರವು ಕಾಂಚನಮಾಲಾ ಸಿಂದೂರಮನೆ ಇವರು ದೀಪ ಬೆಳಗಿಸುವುದರ ಮೂಲಕ ಆರಂಭಗೊಂಡಿತು . ಶಿಬಿರಾರ್ಥಿಗಳಾದ ಸದಾಶಿವ ಭಟ್ ನವಚೇತನ , ಅಶೋಕ್ ಭಟ್ ಮುಕ್ವೆ , ವಿದ್ಯಾರ್ಥಿನಿ ಮಾನಸ ಕೂಡುರಸ್ತೆ , ಆಯುರ್ವೇದ ಹಾಗೂ ಯೋಗ ತಜ್ಞೆ ಡಾ . ಚೇತನಾ ಗಣೇಶ್ ಪ್ರಸಾದ್ , ವೆಂಕಟೇಶ್ವರ ಭಟ್ ಪಟ್ಟೆ , ಪ್ರಶಾಂತಿ ನವೀನ ಕೃಷ್ಣ ಶಾಸ್ತ್ರಿ ತಮ್ಮ ಅನುಭವಗಳನ್ನು ಹಂಚಿಕೊಂಡರು .

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಯದರ್ಶಿ ಗಣೇಶ್ ಮುವ್ವಾರು ಸ್ವಾಗತಿಸಿದರು . ಅರೋಗ್ಯ ಭಾರತಿ ವಿಭಾಗ ಸಂಯೋಜಕ ಪುರುಷೋತ್ತಮ ದೇವಸ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ರೋಗ ಬಾರದಂತೆ ತಡೆಯುವ ಬಗ್ಗೆ ಅರಿವು ಮೂಡಿಸುವ ಅರೋಗ್ಯ ಭಾರತಿಯ ಉದ್ದೇಶವನ್ನು ವಿವರಿಸಿದರು . ಡಾ .ಗಣೇಶ್ ಪ್ರಸಾದ್ ಮುದ್ರಜೆ ಅಧ್ಯಕ್ಷತೆ ವಹಿಸಿ ಮಾತಾಡುತ್ತಾ “ಇಂತಹ ಶಿಬಿರಗಳು ಜನಮಾನಸದಲ್ಲಿ ತರುವ ಪರಿವರ್ತನೆ ಮತ್ತು ಶಿಬಿರದ ಪಾಠಗಳನ್ನು ಆಚರಣೆಗೆ ತರುವ ಪ್ರಯತ್ನ ಮಾಡಬೇಕು . ಪುತ್ತೂರಿನ ನರಿಮೊಗರಿನಂತಹ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಆಯುರ್ವೇದ ಮತ್ತು ಯೋಗದ ಮೂಲಕ ಸಾವಿರಾರು ರೋಗಿಗಳಿಗೆ ಆರೋಗ್ಯದಾನ ಮಾಡುವುದು ಒಂದು ಮಾದರಿ ಕಾರ್ಯ “ಎಂದರು . ಡಾ ಟಿ . ಎನ್ .ಮಂಜುನಾಥ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು . ಪ್ರಸಾದಿನೀ ಆಯುರ್ವೇದ ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕಿ ಡಾ . ಶ್ರುತಿ .ಎಂ .ಎಸ್ . ಔಷಧ ತಯಾರಿಕೆಯಲ್ಲಿ ಸಹಕರಿಸಿ , ಕಾರ್ಯಕ್ರಮ ನಿರೂಪಣೆ ಮಾಡಿದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!