Ad Widget

ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ನಾಳೆಯೂ (ಜು.16) ಶಾಲಾ ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜು. 16 ರಂದು ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ...

ಮೇನಾಲ ಕಾಡಾನೆ ದಾಳಿಗೆ ಕೃಷಿ ನಾಶ, ಸೋಲಾರ್ ಬೇಲಿ ನಿರ್ಮಾಣಕ್ಕೆ ಆಗ್ರಹ

ಅಜ್ಜಾವರ: ಅಜ್ಜಾವರ ಗ್ರಾಮದ ಮೇನಾಲ , ಮೇದಿನಡ್ಕ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಕೃಷಿಗಳು ನಾಶವಾಗಿದ್ದು ಇದೀಗ ಕೃಷಿಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮೇನಾಲದ ರಾಜೇಶ್ ಶೆಟ್ಟಿ ಮೇನಾಲ , ರಾಮಕೃಷ್ಣ ರೈ ಮೇನಾಲ ವಿನೋದ್ ಶೆಟ್ಟಿ ಮೇನಾಲ, ಅದ್ರಮ ಡೇಲ್ಮ್, ಪ್ರಸಾದ್ ರೈ ಮೇನಾಲ , ಸುಧಮಾನಿ ಶೆಟ್ಟಿ, ದಿ.ಸುಧೀರ್ ರೈ ಮೇನಾಲ, ಹರಿಪ್ರಸಾದ್ ಸುಲಾಯ...
Ad Widget

ಜಿಲ್ಲೆಯಲ್ಲಿ ಮುಂದುವರಿದ ಮಳೆ ನಾಳೆ (ಜು.16) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ ಮುಂದುವರಿದಿರುವ ಹಿನ್ನಲೆಯಲ್ಲಿ ನಾಳೆಯು ದಿನಾಂಕ 16-07-2024 ರಂದು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶಿಸಿದ್ದು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ದಿನಾಂಕ:...

ಕುಕ್ಕೆ ಸುಬ್ರಹ್ಮಣ್ಯ : ತುಂಬಿ ಹರಿಯುತ್ತಿರುವ ಕುಮಾರಧಾರ ನದಿ; ಸ್ನಾನಘಟ್ಟ ಮುಳುಗಡೆ

ಯಾತ್ರಾರ್ಥಿಗಳಿಗೆ ತೀರ್ಥಸ್ನಾನ ನೆರವೇರಿಸಲು ಪರ್ಯಾಯ ವ್ಯವಸ್ಥೆ ಇಂದು(ಜು.15) ಮುಂಜಾನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಸ್ನಾನಘಟ್ಟ ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. ಯಾತ್ರಾರ್ಥಿಗಳಿಗೆ ತೀರ್ಥಸ್ನಾನ ನೆರವೇರಿಸಲು ನದಿ ನೀರನ್ನು ಡ್ರಮ್ ಮೂಲಕ ಸಂಗ್ರಹಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳು ನದಿಪಾತ್ರಕ್ಕೆ ತೆರಳದಂತೆ ಕ್ಷೇತ್ರದ ವತಿಯಿಂದ...

ಸೋಣಂಗೇರಿ : ಕೆರೆಗೆ ಬಿದ್ದು ವೃದ್ಧೆ ಮೃತ್ಯು

ಕೆರೆಗೆ ಕಾಲು ಜಾರಿ ಬಿದ್ದು ವಯೋವೃದ್ಧೆಯೋರ್ವರು ಮೃತಪಟ್ಟ ಘಟನೆ ಜಾಲ್ಕೂರು ಗ್ರಾಮದ ಸೋಣಂಗೇರಿಯಲ್ಲಿ ಜು.15ರಂದು ಬೆಳಿಗ್ಗೆ ಸಂಭವಿಸಿದೆ.ಸೋಣಂಗೇರಿ ದಿ.ಮಂಜಪ್ಪ ಶೆಟ್ಟಿ ಅವರ ಧರ್ಮಪತ್ನಿ ಮಾನಕ್ಕರವರ ಶವ ಅವರು ಬೆಳಿಗ್ಗೆ ತಮ್ಮ ತೋಟದಲ್ಲಿ ಕೆರೆಗೆ ಬಿದ್ದಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರಿಗೆ 82 ವರ್ಷ ವಯಸ್ಸಾಗಿತ್ತು.ಮೃತರು ಇಬ್ಬರು ಪುತ್ರಿಯರಾದ ಜಯಶ್ರೀ, ಮಂಜುಳ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.

ಅಜ್ಜಾವರ : ಸಾಕ್ಷಿ ಹೇಳಲು ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ನಡೆದ ವಾಹನ ಅಪಘಾತವೊಂದರ ಬಗ್ಗೆ ಸಾಕ್ಷಿ ಹೇಳಲು ಬಂದಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಐವರ್ನಾಡಿನ ವೆಂಕಟ್ರಮಣ ಎಂದು ಗುರುತಿಸಲಾಗಿದೆ. ಕರಿಯಮೂಲೆಯಲ್ಲಿ ಶನಿವಾರ ನಡೆದ ಪಿಕಪ್ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಆಗಮಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗೂನಡ್ಕ: ಬರೆ ಜರಿದು    ವ್ಯಕ್ತಿಯ ತಲೆಗೆ ಗಾಯ -ಆಸ್ಪತ್ರೆಗೆ ದಾಖಲು

ಸಂಪಾಜೆ ಗ್ರಾಮದ ಗೂನಡ್ಕದ ಪೆಲ್ತಡ್ಕದಲ್ಲಿ  ವ್ಯಕ್ತಿ ಕೆಲಸ ಮಾಡುತ್ತಿದ್ದ ವೇಳೆ ಬರೆ ಜರಿದು ಕಲ್ಲು ತಾಗಿ  ತಲೆಗೆ ಗಾಯಗೊಂಡ ಘಟನೆ ಇಂದು  ನಡೆದಿದೆ.     ಪೆಲ್ತಡ್ಕ ನಿವಾಸಿ ಪದ್ಮನಾಭ ಎಸ್. ಪಿ. ಎಂಬವರು ಕೆಲಸ ಮಾಡುತ್ತಿದ್ದ ವೇಳೆ ದಿಡೀರ್ ಬರೆ ಜರಿತ ಆಗಿದ್ದು, ಕಲ್ಲು ಪದ್ಮನಾಭ ಅವರ ತಲೆಗೆ ತಾಗಿದ್ದು, ಅವರನ್ನು ಸ್ಥಳೀಯರು ಸೇರಿ ಸುಳ್ಯದ...

ಬದುಕು ಪ್ರಪುಲ್ಲತೆಯಿಂದ ಸಾಗಬೇಕಾದರೆ ಸೇವಾ ಮನೋಭಾವನೆ ಅತ್ಯಗತ್ಯ.ರೋ. ಪಿ.ಡಿ.ಜಿ. ರಂಗನಾಥ್ ಭಟ್ 

ಸುಬ್ರಹ್ಮಣ್ಯ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ “ಈ ಪರಿಸರದ ಒಂದಿಷ್ಟು ಜನರಿಗೆ ತನ್ನಿಂದ ಆದಷ್ಟು ಸೇವೆಯನ್ನು ಕಾಯ-ವಾಚ-ಮನಸ ನೀಡಲು ಒಪ್ಪಿ ಶ್ರೇಷ್ಠ ಜನರ ಆಚಾರ ವಿಚಾರ ಹಾಗೂ ನಡೆ-ನುಡಿಗಳನ್ನು ಮೈಗೂಡಿಸಿಕೊಂಡು ಇತರರಿಗೆ ಮಾರ್ಗದರ್ಶನ ದರ್ಶಕವಾಗುವ ಧ್ಯೇಯವನ್ನು ಸಾಕಾರಗೊಳಿಸಲು ರೋಟರಿ ಸಂಸ್ಥೆ ಸದಾ ಪಣತೊಟ್ಟಿದೆ. ಈ ಬದುಕು ಪ್ರಪೂಲತೆಯಿಂದ ಸಾಗಬೇಕಾದರೆ ಸೇವಾ ಮನೋಭಾವನೆ ಅತ್ಯಗತ್ಯ” ಎಂದು ರೋಟರಿ...

ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ (ಏಷ್ಯನ್ ಲೆವೆಲ್ )ಅರ್ಹತೆ ಪಡೆದ ಕ್ಷಮಾ

10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಎಸ್ ಜಿ ಎಸ್ ಇಂಟರ್ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ರಿಸರ್ಚ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರ ಕರ್ನಾಟಕ ಸರ್ಕಾರ ಇವರ ಸಹಕಾರದಲ್ಲಿ 14 ಜುಲೈ...

ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನಲೆಯಲ್ಲಿ ಇಂದು(15-07-2024)ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ ಮುಂದುವರಿದಿರುವ ಹಿನ್ನಲೆಯಲ್ಲಿ ಇಂದು ದಿನಾಂಕ 15-07-2024 ರಂದು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶಿಸಿದ್ದು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ದಿನಾಂಕ:...
Loading posts...

All posts loaded

No more posts

error: Content is protected !!