Ad Widget

ಪ್ರಸೂತಿ ವೈದ್ಯರ ಕೊರತೆ , ಸಿಬ್ಬಂದಿಗಳ ಕೊರತೆ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ, ಮತ ನೀಡುವುದು ಬಿಜೆಪಿಗೆ ಪ್ರಶ್ನಿಸುವುದು ಕಾಂಗ್ರೆಸ್ ನ್ನು – ಗುಂಡುರಾವ್

ಸುಳ್ಯ: ಸುಳ್ಯ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡದಿ ಕುಟುಂಬ ಕಲ್ಯಾಣ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಭೇಟಿ ನೀಡಿ ಡಯಾಲಿಸಿಸ್ , ತುರ್ತು ತೀವ್ರ ಘಟಕ ಸೇರಿದಂತೆ ಇತರೆ ವಾರ್ಡ್ ಗಳಿಗೆ ಬೇಟಿ ನೀಡಿ ರೋಗಿಗಳ ಜೊತೆಗೆ ಸಮಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರ ಕೊರತೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಇಡೀ ರಾಜ್ಯದಲ್ಲಿ ಖಾಲಿ ಹುದ್ದೆಗಳ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಸುಳ್ಯದಲ್ಲಿನ ಸಮಸ್ಯೆಗಳನ್ನು ವಿವರಿಸಿದಾಗ ಡಿ ಹೆಚ್ ಒ ತಿಮ್ಮಯ್ಯರವರು ನೀವೆ ಇದ್ದರೆ ಸೂಚಿಸಿ ಕಳುಹಿಸಿ ಕೊಡಿ ಎಂದಾಗ ಅವರ ವಿರುದ್ದ ಪತ್ರಕರ್ತರು ಸಿಡಿಮಿಡಿಗೊಂಡಾಗ ಸಚಿವರು ಸಮಧಾನ ಪಡಿಸಿದರು. ಇತ್ತ ಸುಳ್ಯದಲ್ಲಿ ಸಮಸ್ಯೆಗಳನ್ನು ಪ್ರಶ್ನಿಸಿದಾಗ ನೀವು ಬೆಜೆಪಿಗೆ ಮತ ನೀಡುವುದು ಪ್ರಶ್ನಿಸುವುದು ಮಾತ್ರ ಕಾಂಗ್ರೆಸ್ ನ್ನು ಎಂದು ಹೇಳಿದರು. ಆಗಸ್ಟ್ ತಿಂಗಳಲ್ಲಿ ಪ್ರಸೂತಿ ವೈದ್ಯರ ನೇಮಸಿ ಭರ್ತಿ ಮಾಡಲಾಗುವುದು ಎಂದು ಹೇಳಿದರು . ಅಧಿಕಾರಿಗಳಿಗೆ ಖಡಕ್ ಆಗಿ ನಿರ್ದೇಶನ ನೀಡಿದ ಸಚಿವರು ಗುತ್ತಿಗೆ ಆಧಾರದಲ್ಲಿನ ಕೆಲಸಗಾರರನ್ನು ನೇಮಿಸಿ ಕ್ರಮ ಜರುಗುವಿಸುವಂತೆ ಸೂಚಿಸಿದರು.

Related Posts

error: Content is protected !!