Ad Widget

ಮಾಲತಿ ಪೈಕ ನಿಧನ

ಗುತ್ತಿಗಾರು ಗ್ರಾಮದ ಪೈಕ ದಿ. ರಾಮಕೃಷ್ಣ ಇವರ ಪತ್ನಿ ಮಾಲತಿ ಜೂ. 29ರಂದು ಹೃದಯಘಾತ ದಿಂದ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಭುವನೇಶ್ವರ, ಧನಂಜಯ, ಸೊಸೆ ಗೀತಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸುಳ್ಯ ನಗರದಲ್ಲಿ ಟ್ರಾಫಿಕ್ ಕುರಿತು ರಿಕ್ಷಾ ಚಾಲಕರ ಜೊತೆಗೆ ಪೊಲೀಸ್ ಅಧಿಕಾರಿಗಳ ಸಭೆ

ಸುಳ್ಯ: ಸುಳ್ಯ ನಗರದಲ್ಲಿ ವಾಹನ ದಟ್ಟನೆ ಹೆಚ್ಚಿದ್ದು ಪದೇ ಪದೇ ಟ್ರಾಫಿಕ್ ಸಮಸ್ಯೆಗಳು ಉಲ್ಬಣಿಸಿ ರಸ್ತೆ ಸಂಚಾರದಲ್ಲಿ ಗೊಂದಲ ಮತ್ತು ಟ್ರಾಫಿಕ್ ಜಾಮ್ ತಪ್ಪಿಸುವ ಮತ್ತು ಮುಂಜಾಗ್ರತೆ ಕುರಿತ ಸಭೆಯು ಸುಳ್ಯ ಠಾಣಾಧಿಕಾರಿ ಸರಸ್ವತಿ ಯವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಅಟೋ ಚಾಲಕರಿಗೆ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರಲ್ಲದೆ ರಾತ್ರಿಯಲ್ಲಿ ಸಂಚಾರ ವೇಳೆಗೆ ಪ್ರಯಾಣಿಕರ ಕುರಿತು...
Ad Widget

ಮಡಪ್ಪಾಡಿ:  ವಿಷ ಸೇವಿಸಿ ಆತ್ಮಹತ್ಯೆ!

ಮಡಪ್ಪಾಡಿಯ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು (ಜು.3 ) ವರದಿಯಾಗಿದೆ.ಮೃತರನ್ನು ಸೀತಾರಾಮ 55 ವರ್ಷ ಎಂದು ಗುರುತಿಸಲಾಗಿದೆ. ಆರ್ಥಿಕ ಸಂಕಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಅಡಿಕೆ ತೋಟಕ್ಕೆ ಹಳದಿ ರೋಗ ಬಾಧಿಸಿದ್ದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು.

ಲಕ್ಷಾಂತರ ರೂಪಾಯಿಗಳಲ್ಲಿ ನಿರ್ಮಿಸಿದ ಕುರುಂಜಿ ಗುಡ್ಡೆ ಪಾರ್ಕ್ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಾಡು – ನಿರ್ವಹಣೆ ಜವಬ್ದಾರಿ ಯಾರಿಗೆ ಉತ್ತರಿಸುವಿರಾ ?

ಸುಳ್ಯ: ಸುಳ್ಯ ನಗರದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಿದ್ದ ಕುರುಂಜಿಗುಡ್ಡೆ ಪಾರ್ಕ್ ಇದೀಗ ನಿರ್ವಾಹಣೆ ಮಾಡದೇ ಇದ್ದು ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಇಡೀ ಸುಳ್ಯದ ನಾಗರೀಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಪ್ರಕೃತಿಯ ರಮಣೀಯತೆ, ತೋಟಗಳ ಸೌಂದರ್ಯ ರಾಶಿ ಜತೆಗೆ ನಗರದ ವಿಹಂಗಮ ನೋಟ ಹೊಂದಿರುವ ಸುಳ್ಯ ನಗರದ ಅತೀ ಎತ್ತರದ ಪ್ರದೇಶದಲ್ಲಿ ಕುರುಂಜಿಗುಡ್ಡೆ ಎಂಬಲ್ಲಿ ನಗರ ಪಂಚಾಯತ್ ಕೆಲ...

ಕುರುಂಜಿಗುಡ್ಡೆ ಪಾರ್ಕ್ ನಲ್ಲಿ  ಸೂಚನಾ ಫಲಕ ಅಳವಡಿಕೆಗೆ ನ.ಪಂ. ಆಡಳಿತಾಧಿಕಾರಿಗಳಿಗೆ ಕೇರ್ಪಳ ಪಯಸ್ವಿನಿ ಯುವಕ ಮಂಡಲ ಮನವಿ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುರುಂಜಿಗುಡ್ಡೆ ಪಾರ್ಕ್ ಗೆ ಸಮಯ ನಿಗದಿ ಪಡಿಸಿ ನಾಮಫಲಕ ಅಳವಡಿಸುವಂತೆ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ವತಿಯಿಂದ ನ.ಪಂ. ಆಡಳಿತಾಧಿಕಾರಿ ಗಳಿಗೆ ಮನವಿ ಜು.1 ರಂದು ಸಲ್ಲಿಸಲಾಯಿತು.ನ.ಪಂ. ವತಿಯಿಂದ ಕೆಲವು ವರ್ಷಗಳ ಹಿಂದೆ  ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಅಲ್ಲಿ  ಆಕರ್ಷಕ ಗಿಡಗಳನ್ನು ನೆಡಲಾಗಿದೆ. ಕುಳಿತುಕೊಳ್ಳಲು ಸಿಮೆಂಟ್ ಬೆಂಚುಗಳನ್ನು ಅಳವಡಿಸಲಾಗಿದೆ. ಮಕ್ಕಳಿಗೆ...

ಕವನ : ಎಚ್ಚರವಹಿಸಬೇಕು ಮಳೆಗಾಲದಲ್ಲಿ…

ಇಳೆಯು ಮಳೆಯನ್ನು ಮನತುಂಬಿ ಕರೆದಿದೆ, ಇಳೆಯ ಕರೆಗೆ ಮಳೆಯು ಧರೆ ತುಂಬಾ ಸುರಿದಿದೆ...ರಾತ್ರಿ-ಹಗಲೆನ್ನದೇ ಸುರಿಯುತ್ತಿರುವ ಈ ಮಳೆಗೆ ತುಂಬಿ ಹರಿಯುತ್ತಿವೆ ನದಿ-ಹಳ್ಳಗಳೆಲ್ಲಾ, ನದಿಯ ಬಳಿ ತೆರಳುವಾಗ ಎಚ್ಚರವಹಿಸಬೇಕು ನಾವೆಲ್ಲಾ...ರಸ್ತೆಯಲ್ಲಿ ಸಾಗುವಾಗಲೂ, ಮನೆಯ ಹೊರಗಡೆ ನಡೆಯುವಾಗಲೂ ಜಾಗ್ರತೆ ವಹಿಸಲೇಬೇಕಿದೆ ಈ ಮಳೆಗಾಲದಲ್ಲಿ, ಕೆಸರು ತುಂಬಿದ ರಸ್ತೆಯಲ್ಲಿ, ಪಾಚಿ ತುಂಬಿದ ಮನೆಯಂಗಳದಲ್ಲಿ...ಮಳೆಗಾಲದಲ್ಲಿ ಆದಷ್ಟು ಹೋಗದಿರಿ ಪ್ರವಾಸವನ್ನ, ತುಂಬಿ ಹರಿಯುತ್ತಿರುವ...

ಗುತ್ತಿಗಾರು : ಶೌರ್ಯ ವಿಪತ್ತು ಘಟಕದಿಂದ ಶ್ರಮದಾನ

ಪೈಕ ಶ್ರೀ ಶಿರಾಡಿ ದೈವಸ್ಥಾನದ ಎದುರುಗಡೆ ಬೃಹತ್ ಕಿನ್ನಿಗೋಳಿ ಮರ ಬಿದ್ದು ಸಾರ್ವಜನಿಕ ದಾರಿಗೆ ತೊಂದರೆಯಾಗಿತ್ತು. ದಾರಿಗೆ ಬಿದ್ದ ಮರದ ಗೆಲ್ಲು ಬಿದ್ದ ಗೆಲ್ಲುಗಳನ್ನು ಗುತ್ತಿಗಾರು ಶೌರ್ಯ ವಿಪತ್ತು ಘಟಕದ ಸದಸ್ಯರು ತೆರವುಗೊಳಿಸಿದರು. ಈ ಶ್ರಮದಾನದಲ್ಲಿ ಶೌರ್ಯ ವಿಪತ್ತು ಘಟಕದ ಸಂಯೋಜಕರಾದ ಲೋಕೇಶ್ವರ ಡಿ ಆರ್, ಸದಸ್ಯರುಗಳಾದ ಪಿ ಜಯರಾಮ, ಅಚ್ಯುತ ಗುತ್ತಿಗಾರು, ಸತೀಶ್ ಮೂಕಮಲೆ,...
error: Content is protected !!