Ad Widget

ಸುಳ್ಯ: ಶ್ರೀ ಸಂಚಾರಿ ಗುಳಿಗ ಕ್ಷೇತ್ರದಲ್ಲಿ ಪ್ರತಿಷ್ಠಾ ಮಹೋತ್ಸವ

ಸುಳ್ಯದ ಜೂನಿಯರ್ ಕಾಲೇಜು‌ ಬಳಿಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ಕ್ಷೇತ್ರದ ಪ್ರತಿಷ್ಠಾ ಮಹೋತ್ಸವ ಜೂ.10 ರಿಂದ ಆರಂಭಗೊಂಡು ಜೂ.12 ರವರೆಗೆ ನಡೆಯಿತು. ಪೆರಾಜೆಯ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೈವದ ಪ್ರತಿಷ್ಠೆ ನಡೆಯಿತು. ಜೂ.10 ರಂದು ಸಂಜೆ ಸುದರ್ಶನ ಹೋಮ, ಪ್ರೇತಬಾಧೆ ಉಚ್ಚಾಟನೆ. ಜೂ.11 ರಂದು ತಂತ್ರಿಗಳ ಆಗಮನ. ಸಂಜೆ ಸಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ವಾಸ್ತಹೋಮ, ವಾಸ್ತುಬಲಿ, ಪ್ರಾಕಾರ ಬಲಿಪೂಜೆ, ಅನ್ನಸಂತರ್ಪಣೆ ನಡೆಯಿತು. ಜೂ.12 ರಂದು ಬೆಳಗ್ಗೆ ಗಣಹೋಮ, ಕಲಶಪೂಜೆ, ಬೆಳಗ್ಗೆ 9-02 ಕ್ಕೆ ಕರ್ಕಾಟಕ ಲಗ್ನದಲ್ಲಿ ಶ್ರೀ ದೈವದ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲಸೇವೆ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷ ರಘುನಾಥ ಶೆಟ್ಟಿ, ಉಪಾಧ್ಯಕ್ಷ ನೋಣಪ್ಪ ಗೌಡ ಕಲ್ಕುದಿ ಮನೆ, ಜತೆ ಕಾರ್ಯದರ್ಶಿ ಲವಕುಮಾರ್ ಕನ್ನಡ್ಕ, ಕೋಶಾಧಿಕಾರಿ ಮಹಾಲಿಂಗನ್ ಬಿ, ಗೌರವ ಸಲಹೆಗಾರರಾದ ದಯಾನಂದ ಹೊದ್ದೆಟ್ಟಿ, ರಾಮಕೃಷ್ಣ ರಾವ್, ದಿನೇಶ್ ರಾವ್, ಗೌರವಾದ್ಯಕ್ಷರು ಸಂಕಪ್ಪ ನೀರ್ಪಡಿ, ಕೃಷ್ಣಪ್ಪ ಪಾರೆಪ್ಪಡಿ, ಶಶಿಕಲಾ ಶಂಕರ್, ನಿರಂಜನ್ ಮಾವಜಿ , ಭಾರತ್ ಆಗ್ರೋ ಸನತ್ , ವಾಸುದೇವ ಬಳ್ಳಡ್ಕ , ಮಲ್ಲಿಕಾ ‘ಭಟ್ ‘ ಸಮಿತಿ ಸದಸ್ಯರು ಭಕ್ತಾದಿಗಳು ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!