Ad Widget

ರಾತ್ರಿ ರಾಣಿ *ಬ್ರಹ್ಮಕಮಲ*

ಗಿಡನೆಟ್ಟು ಪೋಷಿಸಿ ಹೂ ಬಿಡುವುದನ್ನೇ ಕಾಯುತ್ತಿದ್ದ ಪುಷ್ಪಪ್ರೇಮಿಗಳಿಗೆ ಗಿಡದಲ್ಲಿ ಹೂವಿನ ಮೊಗ್ಗು ಕಂಡಾಗ  ಸಂಭ್ರಮ ಜೊತೆಗೆ ಸಾರ್ಥಕ ಭಾವ ಮನೆ ಮಾಡುತ್ತದೆ. ಅದರೇ ಒಂದೋ ಎರಡೋ ವರ್ಷಕ್ಕೊಮ್ಮೆ ಹೂ ಬಿಡುವ ಬ್ರಹ್ಮಕಮಲ ಕಂಡರೇ ಎಷ್ಷು ಸಂತೋಷವಾಗಬಹುದಲ್ಲವೇ ?  ಅಂದಹಾಗೆ ಈ ಬ್ರಹ್ಮಕಮಲ ಅರಳಿದ್ದು ಗುತ್ತಿಗಾರು ಗ್ರಾಮದ ಅಮೆ ಮನೆ  ವೀರಪ್ಪ ಗೌಡರ ಮನೆಯಲ್ಲಿ .  ಒಂದಷ್ಟು...

ಗೀತಾಂಜಲಿ – ಪ್ರಸಾದ್

ಸುಳ್ಯ ತಾ.ದೇವಚಳ್ಳ ಗ್ರಾಮದ ದೇವ ಸೀತಾರಾಮ ಗೌಡರ ಪುತ್ರಿ ಗೀತಾ ಳ ವಿವಾಹವು ಕಡಬ ತಾ. ಸವಣೂರು ಗ್ರಾಮದ ಆರೇಲ್ತಡಿ ಹೊನ್ನಪ್ಪ ಗೌಡರ ಪುತ್ರ ಪ್ರಸಾದ್ ರೊಂದಿಗೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನ ಶಾಂತಿಮೊಗರು ಕುದ್ಮಾರು ಇಲ್ಲಿ ಜೂ. 14 ರಂದು ನಡೆಯಿತು.
Ad Widget

ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಹರಿಪ್ರಸಾದ್ ಹಾಲೆಮಜಲು

ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಟಿ.ಬಿ ಸೆಕ್ಷನ್ ನಲ್ಲಿ  ಕಳೆದ 15 ವರುಷದಿಂದ ಕೆಲಸ ನಿರ್ವಹಿಸುತ್ತಿರುವ ಹರಿಪ್ರಸಾದ್  ಹಾಲೆಮಜಲು ಲಾಕ್ಡೌನ್ ಪ್ರಾರಂಭವಾದಗಿನಿಂದಲೂ ಇವತ್ತಿನ ವರೆಗೆ ಕೊರೋನಾ  ವಾರಿಯರ್ಸ್‌  ಆಗಿಯೂ  ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಪಿಪಿಇ ಕಿಟ್  (personal protection equipment kit)ಆಳವಡಿಸಿಕೊಂಡು ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರದೇಶಗಳಿಂದ ಬರುವ  ಪ್ರಯಾಣಿಕರ ಮತ್ತು ವೆನ್ಲಾಕ್ ಆಸ್ಪತ್ರೆಗೆ ಬರುವ ಕೋರಾನಾ ರೋಗಿಗಳ ತಪಾಸಣೆ ಕಾರ್ಯದಲ್ಲಿ...

ಕಾಪು-ಪೆರುವೋಡಿ ರಸ್ತೆ ಕಾಮಗಾರಿ ಕಳಪೆ – ಕಿತ್ತು ಹೋಗಿರುವ ಮರುಡಾಮರೀಕರಣ

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕಾಪು ಎಂಬಲ್ಲಿಂದ ಪೆರುವೋಡಿ ಶ್ರೀ ವಿಷ್ಣು ಮೂರ್ತಿದೇವಸ್ಥಾನಕ್ಕೆ ಹೋಗುವ ರಸ್ತೆಗೆ ಡಾಮರೀಕರಣ ಮಾಡಲಾಗಿದ್ದು, ಕಾಮಗಾರಿ ತೀರಾ ಕಳಪೆಯಾಗಿದೆ. ಸರಿಯಾದ ಗುಣಮಟ್ಟ ಕಾಪಾಡದೆ, ಅಧಿಕಾರಿಗಳು, ಗುತ್ತಿಗೆದಾರರು ಅನುದಾನ ದುರುಪಯೋಗ ನಡೆಸಿದ್ದಾರೆ. ಸುಮಾರು 17 ಲಕ್ಷ ರೂಪಾಯಿಯ ಅನುದಾನದಲ್ಲಿ ಈ ರಸ್ತೆಯ ಡಾಮರೀಕರಣ ಮಾಡಲಾಗಿದ್ದು, ಕಾಮಗಾರಿ ಮುಗಿದ ಹದಿನೇಳೇ ದಿನದಲ್ಲಿ ಕಾಮಗಾರಿ ಕರ್ಮಕಾಂಡ...

ಜುಲೈ 4-ಸುಳ್ಯದಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಸಾಂಕೇತಿಕ ಪ್ರತಿಭಟನೆ

ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲ ಮನ್ನಾಕ್ಕಾಗಿ, ಹಾಗೂ ವಸೂಲಿಗಾರರ ದಬ್ಬಾಳಿಕೆ ವಿರೋಧಿಸಿ ಜುಲೈ 4 ರಂದು ಸುಳ್ಯ ತಾಲೂಕು ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ಸುಳ್ಯ ತಾಲೂಕು ಪರಿಸರದ ಸಾಲ ಸಂತ್ರಸ್ತ ಮಹಿಳೆಯರು ಪ್ರತಿಭಟನೆ ಯಲ್ಲಿ ಭಾಗವಹಿಸುವಂತೆ ಸಂಘಟಕರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಬಿಎಂ ಭಟ್...

ಸುಳ್ಯ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಪೂಜಾ ವಿಧಾನಗಳ ಬಗ್ಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮುಖಂಡರುಗಳ ಸಭೆ

ಕೋವಿಡ್ 19 ರ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಧಾರ್ಮಿಕ ಕೇಂದ್ರಗಳ ದ್ವಾರಗಳನ್ನು ಮುಚ್ಚಲ್ಪಟ್ಟು ಕಳೆದ ಎರಡೂವರೆ ತಿಂಗಳಿನಿಂದ ಪೂಜಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್ 8 ರಿಂದ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಪೂಜಾ ಆರಾಧನೆಗೆ ಅವಕಾಶ ನೀಡಲಾಯಿತು.ಇದೀಗ ಕೊರೋಣ ಮಹಾಮಾರಿಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂನ್ 26ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಎಲ್ಲಾ ಧಾರ್ಮಿಕ...

ಕಿಲಂಗೋಡಿ ಶಂಕರರಾವ್ ನಿಧನ

ಕಳಂಜ ಗ್ರಾಮದ ಕಿಲಂಗೋಡಿ ಶಂಕರರಾವ್ ಜೂ೨೬ ರಂದು ನಿಧನರಾದರು ಅವರಿಗೆ 98 ವರ್ಷ ವಯಸ್ಸಾಗಿತ್ತು. ಇವರು ಪುತ್ತೂರು ಬಾಲವಲಿಕ್ಕರ್ ಸಂಘದ ಮಾಜಿ ಅಧ್ಯಕ್ಷರಾಗಿ, ಸಮಾಜದ ಪ್ರಮುಖರಾಗಿ, ಮುಗೇರು ದೇವಸ್ಥಾನದ ಆಡಳಿತ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಾಳಿದಲ್ಲಿರುವ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

ನಾಳೆಯಿಂದ ಮುಂಗಾರು ಚುರುಕು

ನಾಳೆಯಿಂದ ಕರ್ನಾಟಕ ಕರಾವಳಿ ಭಾಗಗಳಲ್ಲಿ ಮುಂಗಾರು ಪುನಃ ಚುರುಕುಗೊಳ್ಳುವ ಮುನ್ಸೂಚೆನೆ ಇದೆ. ಇವತ್ತು ಕೇರಳ ಕರಾವಳಿ ಭಾಗಗಳಾದ್ಯಂತ ಉತ್ತಮ ಮಳೆಯ ಮುನ್ಸೂಚೆನೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(26.06.2020 ಶುಕ್ರವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 270ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...

ನಾನು ಮತಾಂತರವಾಗಿ ಮದುವೆ ಅಗಿದ್ದ ವ್ಯಕ್ತಿ ಈಗ ದೂರವಾಗುತ್ತಿದ್ದಾನೆ ಎಂದು ಹೇಳಿಕೊಂಡು ದಾಖಲೆ ಸಮೇತ ಬಂದು ಮನೆಯಲ್ಲಿ ಠೀಕಾಣಿ ಹೂಡಿದ ಮಹಿಳೆಗೆ ಸುಳ್ಯದ ಪೊಲೀಸರ ಕಾವಲು

ಎರಡು ವಾರದ ಹಿಂದೆ ಸುಳ್ಯ ಪೊಲೀಸ್ ಠಾಣೆಗೆ ಬಂದು ಕಟ್ಟೆಕಾರ್ ಅಂಗಡಿಯವರ ಮಗನ ಮೇಲೆ ದೂರು ನೀಡಿದ್ದ ಬೆಂಗಳೂರಿನ ಮಹಿಳೆ ಈಗ ಮಹಿಳಾ ಆಯೋಗದ ಆದೇಶ ಹಿಡಿದುಕೊಂಡು ಸುಳ್ಯಕ್ಕೆ ಬಂದಿದ್ದು ಪೊಲೀಸರು ಮತ್ತು ಸಿ.ಡಿ.ಪಿ.ಒ. ರವರು ಈಗ ಅವರನ್ನು ಕಟ್ಟೆ ಅಬ್ದುಲ್ಲರವರ ಮನೆಗೆ ಬಿಟ್ಟಿದ್ದಾರೆ. ಆದರೆ ಆಕೆಯನ್ನು ಮನೆ ಸೇರಿಸಲು ನಿರಾಕರಿಸಿರುವ ಕಟ್ಟೆ ಅಬ್ದುಲ್ಲ ಅವರ...
Loading posts...

All posts loaded

No more posts

error: Content is protected !!