Ad Widget

ರಾಜ್ಯಕ್ಕೆ ತಪ್ಪುತ್ತಿಲ್ಲ ಕೊರೊನಾ ಗ್ರಹಣ – ಇಂದು ಒಂದೇ ದಿನ 453 ಕೇಸ್


ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ಅವಧಿಯಲ್ಲಿ 453 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆ ಕಂಡಂತಾಗಿದೆ. ಇಂದು ಬೆಂಗಳೂರು ನಗರದಲ್ಲಿ ಬರೋಬ್ಬರಿ 196 , ಬಳ್ಳಾರಿ 40, ಕಲಬುರಗಿ 39, ವಿಜಯಪುರ 39, ಮೈಸೂರು ಜಿಲ್ಲೆಯ 18 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನು ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದಾಗಿ 05 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಅನ್ಯ ಕಾರಣದಿಂದಾಗಿ ಸಾವನ್ನಪ್ಪಿದ 4 ಜನರನ್ನು ಸೇರಿಸಿ ಒಟ್ಟು 141 ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಮೂರು, ಬೀದರ್​ನಲ್ಲಿ ಎರಡು ಸಾವನ್ನಪ್ಪಿವೆ.

ಇಂದು ಒಟ್ಟು 225 ಜನರು ಗುಣಮುಖರಾಗಿದ್ದು. ಈ ಮೂಲಕ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 5618 ಕ್ಕೆ ಏರಿಕೆಯಾಗಿದೆ, 3391 ಆಕ್ಟಿವ್​ ಕೇಸ್​ ಇದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ಈ 453 ಪ್ರಕರಣಗಳಲ್ಲಿ 69 ಅಂತಾರಾಜ್ಯ ಹಾಗೂ 05 ಅಂತಾರಾಷ್ಟ್ರೀಯ ಪ್ರಯಾಣಿಕರು ಇರೋದಾಗಿ ಮಾಹಿತಿ ಲಭ್ಯವಾಗಿದೆ.

*ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ..?*

ಬೆಂಗಳೂರು ನಗರ-196
ಬಳ್ಳಾರಿ-40
ಕಲಬುರಗಿ-39
ವಿಜಯಪುರ-39
ಮೈಸೂರು-18
ಗದಗ-18
ಧಾರವಾಡ-15
ಬಾಗಲಕೋಟೆ-14
ಬೀದರ್-13
ದಾವಣಗೆರೆ-08
ಉತ್ತರ ಕನ್ನಡ-08
ಕೋಲಾರ-08
ದಕ್ಷಿಣ ಕನ್ನಡ-07
ಮಂಡ್ಯ-05
ಹಾಸನ-05
ತುಮಕೂರು-04
ಯಾದಗಿರಿ-03
ಚಿಕ್ಕಬಳ್ಳಾಪುರ-03
ಹಾವೇರಿ-03
ರಾಯಚೂರು-02
ಶಿವಮೊಗ್ಗ-02
ರಾಮನಗರ-02
ಚಿಕ್ಕಮಗಳೂರು -01

*ಇಂದುಯಾವಜಿಲ್ಲೆಯಲ್ಲಿ ಎಷ್ಟು ಮಂದಿ ಡಿಸ್ಚಾರ್ಜ್..?*

ಬೀದರ್-58
ರಾಯಚೂರು-34
ದಕ್ಷಿಣ ಕನ್ನಡ-26
ಬೆಂಗಳೂರು ನಗರ-17
ಯಾದಗಿರಿ -15
ಬಳ್ಳಾರಿ-12
ಧಾರವಾಡ-12
ಕಲಬುರಗಿ-09
ವಿಜಯಪುರ-07
ಹಾಸನ-07
ಉಡುಪಿ-06
ಉತ್ತರ ಕನ್ನಡ-06
ಬಾಗಲಕೋಟೆ-06
ಚಿತ್ರದುರ್ಗ-03
ಗದಗ-03
ಬೆಳಗಾವಿ-03
ಕೊಪ್ಪಳ -01

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!